ಪುಣ್ಯನದಿ ಅಘನಾಶಿನೀ
ಅಘನಾಶಿನೀ ನಗ ಚಾರಿಣೀ$$$
ಜಗದ ಧಗೆ ತಣಿಸುವ ಧುನೀ
ಖಗಜಗಜಲ ಚರ ಕುಲ ಪೋಷಿಣಿ
ಸೊಗವನೀಯ್ವ ತರಂಗಿಣೀ.
ಶಿರಸಿಪುರ ಶಂಕರನ ಚರಣದೊ
ಳುದಿಸಿ ಜನ ತೃಷೆ ತಣಿಸಿದೆ
ಪುರಪತಿ ಗಣಪ ಮಾರಿಕಾಂಬೆಗೆ
ಮಣಿಯುತಲಿ ಸಂಚರಿಸಿದೆ.
ವರಪ್ರಸೂತ ಪುರಾಧಿಪತಿ ಹರ
ಸುತ ಸುಮುಖ ಸಂಪ್ರೀತಳೇ
ಸಿರಿ ನೆಲೆಯ
ಲಕುಮೀ ನೃಸಿಂಹನ
ಚರಣದಡಿಯಲಿ ನಲಿವಳೇ.
✍️....ಶ್ರೀಪತಿ ಸುತ

1 Comments:
🙏🙏🙏
Post a Comment
Subscribe to Post Comments [Atom]
<< Home