Thursday, January 9, 2025

ಪುಣ್ಯನದಿ  ಅಘನಾಶಿನೀ

ಅಘನಾಶಿನೀ ನಗ ಚಾರಿಣೀ$$$
ಜಗದ ಧಗೆ ತಣಿಸುವ ಧುನೀ
ಖಗಜಗಜಲ ಚರ ಕುಲ ಪೋಷಿಣಿ
ಸೊಗವನೀಯ್ವ ತರಂಗಿಣೀ.

ಶಿರಸಿಪುರ ಶಂಕರನ ಚರಣದೊ
ಳುದಿಸಿ ಜನ ತೃಷೆ ತಣಿಸಿದೆ
ಪುರಪತಿ ಗಣಪ ಮಾರಿಕಾಂಬೆಗೆ
ಮಣಿಯುತಲಿ ಸಂಚರಿಸಿದೆ.

ವರಪ್ರಸೂತ ಪುರಾಧಿಪತಿ ಹರ
ಸುತ ಸುಮುಖ ಸಂಪ್ರೀತಳೇ
ಸಿರಿ ನೆಲೆಯ
ಲಕುಮೀ ನೃಸಿಂಹನ
ಚರಣದಡಿಯಲಿ ನಲಿವಳೇ.

✍️....ಶ್ರೀಪತಿ ಸುತ

1 Comments:

At January 9, 2025 at 9:41 PM , Blogger Pannaga hegde said...

🙏🙏🙏

 

Post a Comment

Subscribe to Post Comments [Atom]

<< Home